News and Events
ವಿಪಿನ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಪುತ್ತೂರು: ಇತ್ತೀಚೆಗೆ ಸ್ವರ್ಗಸ್ಥರಾದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಸದಸ್ಯರು, ಪುತ್ತೂರಿನ ಖ್ಯಾತ ಉದ್ಯಮಿಗಳು ಆದ ವಿಪಿನ್ ಕುಮಾರ್ ಕೆ ಅವರಿಗೆ ವಿವೇಕಾನಂದ ಪಾಲಿಟೆಕ್ನಿಕ್ನ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾತಾ ಅಮೃತಾನಂದಮಯಿಯವರ ಪರಮ ಭಕ್ತರು, ಕೊಡುಗೈ ದಾನಿಯೂ, ವಿವೇಕಾನಂದ ಪಾಲಿಟೆಕ್ನಿಕ್ಗೆ ಎಲ್ಲಾ ವಿಧಗಳಲ್ಲೂ ಸಹಾಯ ಹಸ್ತ ಚಾಚಿದ್ದ ವಿಪಿನ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮಗೆಲ್ಲ ಅಪಾರ ದು:ಖದ ಸಂಗತಿ. ಅವರು ಜೀವನದ ಪ್ರತಿಯೊಂದು ಘಟ್ಟದಲ್ಲೂ ಯಾವ ರೀತಿ ಇರಬೇಕು ಎಂದು ತಿಳಿದುಕೊಂಡವರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ
ಎರಡನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ
ಅನುಭವವೇ ಜೀವನದ ಸರ್ವಶ್ರೇಷ್ಠ ಶಿಕ್ಷಕ – ಯಸ್. ಆರ್. ಸತೀಶ್ಚಂದ್ರ ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನ ಆಶ್ರಯದಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವುಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ಎರಡನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮವು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ನೆಲಹಾಸು ಅಳವಡಿಕೆ, ಗ್ರಾಹಕ ಮಾಹಿತಿ ಸೇವಾ ಕೇಂದ್ರ, ಪ್ಲಂಬಿಂಗ್
ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ ಸಮಾರಂಭ
ಪುತ್ತೂರು: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇವುಗಳ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಆತ್ಮನಿರ್ಭರ ಭಾರತದ ಆಶಯ ಗೀತೆಯೊಂದಿಗೆ ಆರಂಭಗೊಂಡಿತು. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ಇವರು, ಇಂದು ಕಾರ್ಯಕ್ರಮದ ಸಮಾರೋಪ ಆದರೆ ನಮ್ಮ ಜೀವನದ ಆರಂಭ ಇವತ್ತಿನಿಂದ ಆಗಬೇಕಾಗಿದೆ. ಸಾಧನೆ
ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳೋಣ – ಸಂಜೀವ ಮಠಂದೂರು
ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ ಪುತ್ತೂರು: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇವುಗಳ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರ ಆತ್ನನಿರ್ಭರ ಭಾರತದ ಪರಿಕಲ್ಪನೆಯಡಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಸುಳ್ಯದ ಎ.ಪಿ.ಎಂ.ಸಿ. ಸಭಾಭವನ, ಕಲ್ಲಡ್ಕದ ಶ್ರೀರಾಮ ಭಜನಾ ಮಂದಿರದಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು.
ಪೌರ ರಕ್ಷಣಾ ದಳದ ಕಾರ್ಯಕರ್ತರಿಗೆ ವಿಪತ್ತು ನಿರ್ವಹಣಾ ತರಬೇತಿ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಪೌರ ರಕ್ಷಣಾ ಪಡೆ ಪುತ್ತೂರು ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಸಹಯೋಗದೊಂದಿಗೆ ಇಲ್ಲಿನ ಪೌರ ರಕ್ಷಣಾ ದಳದ ಸದಸ್ಯರಿಗೆ ವಿಪತ್ತು ನಿರ್ವಹಣಾ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗೋಪಾಲ್ ಮೀನಾ, ಕಮಾಂಡೆಂಟ್ NDRF ಗುಂಟೂರು ಇವರು “ಯಾವುದೇ ಪ್ರಕೃತಿ ವಿಕೋಪಗಳು ನಮಗೆ ಮುನ್ಸೂಚನೆ ಕೊಟ್ಟು ಬರುವುದಿಲ್ಲ ಹಾಗೂ ಇವುಗಳನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲ, ಆದರೆ ನಮಗೆ ಸರಿಯಾದ ಮಾಹಿತಿ
ವಿಶ್ವ ಯೋಗ ದಿನಾಚರಣೆ 2020
ಆತ್ಮ ಮತ್ತು ಪರಮಾತ್ಮನನ್ನು ಒಂದುಗೂಡಿಸುವುದೇ ಯೋಗ – ಪ್ರಸನ್ನ ಎನ್. ಭಟ್ ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪುತ್ತೂರು ನಗರ ಕಾರ್ಯವಾಹ ಶ್ರೀ ಚಂದ್ರಶೇಖರ್ ನಡೆಸಿಕೊಟ್ಟರು. ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಯೋಗದಿಂದ ಆರೋಗ್ಯ, ಪ್ರಧಾನಿ ಮೋದೀಜಿಯವರ ಆಶಯದಂತೆ ಯೋಗವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಮತ್ತು ಸದೃಢ ಭಾರತವನ್ನು ನಿರ್ಮಿಸೋಣ ಎಂದರು.
ಪೌರ ರಕ್ಷಣಾ ದಳದ ರಚನೆ ಹಾಗೂ ತರಬೇತಿ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಸಿವಿಲ್ ಡಿಪೆನ್ಸ್ ಪೋರ್ಸ್, ಪುತ್ತೂರು ಘಟಕ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವಜನರ ಒಂದು ಪೌರ ರಕ್ಷಣಾ ದಳವನ್ನು ರಚಿಸಿ ಅವರಿಗೆ ಪ್ರಥಮ ಚಿಕಿತ್ಸೆ, ಆಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣಾ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ದಿನಕರ ಶೆಟ್ಟಿ, ಉಪ ಪೋಲಿಸ್ ಅಧೀಕ್ಷಕರು, ಪುತ್ತೂರು ಇವರು 2009 ರಲ್ಲಿ ಅತಿವೃಷ್ಠಿ ಸಮಯದಲ್ಲಿ ಮಂತ್ರಾಲಯದ ಸಮೀಪ ತುಂಗಭದ್ರಾ ಮತ್ತು ಅಘನೀ ನದಿ ತೀರದ ಹಳ್ಳಿಯ ಒಂದು ಶಾಲೆಯಲ್ಲಿ ಸಿಲುಕಿಕೊಂಡಿದ್ದ ಶಿಕ್ಷಕಿಯರನ್ನು ಕರೆತರಲು
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕಾರ್ಯಗಾರ
ಪುತ್ತೂರು: ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರದ ವತಿಯಿಂದ ತೃತೀಯ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ಎದುರಿಸಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು. ಈ ಕಾರ್ಯಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರುವ ಪ್ರಶ್ನೆಗಳಿಗೆ ಹೇಗೆ ಸುಲಭವಾಗಿ ಉತ್ತರಿಸಬಹುದು ಹಾಗೂ ಉದ್ಯೋಗಕ್ಕೆ ಸೇರುವ ಮುನ್ನ ತಮ್ಮ ಜ್ಞಾನವನ್ನು ವೃದ್ಧಿಸುವುದು ಹೇಗೆ ಎಂಬುದರ ಬಗ್ಗೆ ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಜೆ.ಸಿ.ಐ. ತರಬೇತುದಾರರಾದ ಶ್ರೀ ಸತೀಶ್ ಭಟ್, ಬಿಳಿನೆಲೆ ಅವರು
ಭಾನ್ಕುಳಿ ಮಠದ ಗೋಶಾಲೆಗೆ ಗೋವುಗಳ ಮೇಲೆತ್ತುವ ನೂತನ ಸಾಧನ ’ಜೀವಾಧಾರ’ದ ಸಮರ್ಪಣೆ
ಪುತ್ತೂರು: ಕುಸಿದು ಬಿದ್ದ ದನ, ಎತ್ತುಗಳನ್ನು ಆದರಿಸಿ ನಿಲ್ಲಿಸಿ ಚಿಕಿತ್ಸೆ ಮಾಡಲು ಅನುಕೂಲ ಮಾಡುವ ಯಂತ್ರವನ್ನು ಅಭಿವೃದ್ಧಿ ಪಡಿಸಿ ಭಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ನಡೆದ ಸರ್ವ ಸೇವಕ ಸಮಾವೇಶದಲ್ಲಿ ಗೋಶಾಲೆಗೆ ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಸಮರ್ಪಿಸಲಾಯಿತು. ಶ್ರೀರಾಮಚಂದ್ರಾಪುರಮಠದ ಜಗದ್ಗರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಕಾಲೇಜಿನ ತಂಡಕ್ಕೆ ಶಾಲು ಟಂಕೆ ಮಂತ್ರಾಕ್ಷತೆ ನೀಡಿ, ಗೋ ಲೋಕಕ್ಕೆ ನೀಡಿದ ಮಹಾ ಪುಣ್ಯಪ್ರದ ಕೆಲಸ ಎಂದು ಭಾವನಾತ್ಮಕವಾಗಿ ನುಡಿದು ಈ ಸಾಧನಕ್ಕೆ ‘ಜೀವಾಧಾರ’ ಎಂದು ನಾಮಕರಣ ಮಾಡಿದರು. ವಿವೇಕಾನಂದ
ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಮಾಹಿತಿ ಕಾರ್ಯಾಗಾರ
ಪುತ್ತೂರು: ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಬಗ್ಗೆ ವಿವೇಕಾನಂದ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಜನೌಷಧಿ ಕರ್ನಾಟಕ ಪ್ರಾಂತೀಯ ವಿಭಾಗಾಧಿಕಾರಿಯಾದ ಡಾ| ಅನಿಲ ದೀಪಕ್ ರೈ ನಡೆಸಿಕೊಟ್ಟರು. ಮುಖ್ಯವಾಗಿ ಮಾರ್ಚ್ 01 ರಿಂದ ಮಾರ್ಚ್ 07 ರವರೆಗೆ ಒಂದು ವಾರವನ್ನು ಜನೌಷಧಿ ವಾರವಾಗಿ ದೇಶಾದ್ಯಂತ ಆಚರಿಸಲಾಗುತ್ತಿದ್ದು ಈ ಬಗ್ಗೆ ಯುವ ಜನರಲ್ಲಿ ಅರಿವನ್ನು ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಾ| ಅನಿಲ ದೀಪಕ್ ರೈ ಮಾತನಾಡುತ್ತಾ, ಜನೌಷಧಿಯ ಔಷಧಾಲಯಗಳಲ್ಲಿ ದೊರಕುವ ಎಲ್ಲಾ ವಿಧವಾದ ಔಷಧಿಗಳು ಉತ್ತಮ ಗುಣಮಟ್ಟದಾಗಿದ್ದು