News and Events
ಆಡಳಿತ ಮಂಡಳಿ ಅಧ್ಯಾಪಕ, ಅಧ್ಯಾಪಕೇತರ ಜಂಟಿ ಸಭೆ
ಸ್ವಾಮಿ ವಿವೇಕಾನಂದರ ೧೫೦ ನೇ ಹುಟ್ಟು ಹಬ್ಬವನ್ನು ಅದ್ದೂರಿಯಿಂದ ನೆರವೇರಿಸುವ ನಿಟ್ಟಿನಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿ, ಅಧ್ಯಾಪಕವೃಂದ ಹಾಗೂ ಅಧ್ಯಾಪಕೇತರ ಜಂಟಿ ಸಭೆ ತಾರೀಖು ೨೪-೦೮-೨೦೧೨ ನೇ ಶುಕ್ರವಾರ ಅಪರಾಹ್ನ ೪-೩೦ಕ್ಕೆ ಕೊಠಡಿ ಸಂಖ್ಯೆ೦೦೫ ರಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೋ| ಎ.ವಿ.ನಾರಾಯಣ ಇವರು ವಹಿಸಿದ್ದರು. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀಯುತ ಗೋಪಿನಾಥ್ ಶೆಟ್ಟಿ ಯವರು ಪ್ರಾಸ್ತಾವಿಕ ಭಾಷಣವನ್ನು ಮಾಡಿ ವಿವೇಕಾನಂz ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳ, ಎಲ್ಲಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳೀಯ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸ್ವಾತಂತ್ರ್ಯೋತ್ಸವ.
ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರಿಸುವಂತಹ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದೆ – ಎಂದು ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಎ.ವಿ.ನಾರಾಯಣ ಇವರು ಹೇಳಿದರು. ಇವರು ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು. ನಾವು 66ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಾ ಇದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಈಗ ನಮ್ಮೊಂದಿಗಿಲ್ಲ ಅವರು ಬಹಳಷ್ಟು ಆಶೋತ್ತರಗಳನ್ನು ಇಟ್ಟುಕೊಂಡಿದ್ದರು. ಈ 65 ವರ್ಷಗಳಲ್ಲಿ ನಾವು ಶಿಕ್ಷಣ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ
ವಿವೇಕಾನಂದ ಪಾಲಿಟೆಕ್ನಿಕ್ ಆವರಣದಲ್ಲಿ ವನಮಹೋತ್ಸವ
ಪುತ್ತೂರು: ಭೌತಿಕ, ಜೈವಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿಸರದ ಸುಧಾರಣೆ ಈಗ ಅತ್ಯಂತ ಅವಶ್ಯಕ ವಾಗಿರುವಂತಹುದು ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಕಾರ್ಯಪ್ರವೃತ್ತರಾಗ ಬೇಕಾಗಿದೆ. ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಶ್ರೀ ಶ್ರೀಧರ ಪಿ. ಹೇಳಿದ್ದಾರೆ. ಇವರು ವಿವೇಕಾನಂದ ಪಾಲಿಟೆಕ್ನಕ್ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ, ಮಂಗಳೂರು ವಿಭಾಗ, ರೋಟರಿ ಕ್ಲಬ್ ಪುತ್ತೂರು ಪೂರ್ವ ಹಾಗೂ ಪುತ್ತೂರು ಪಾಲಿಟೆಕ್ನಕ್ ಇದರ ಸಹಯೋಗದೊಂದಿಗೆ ಮಗುವಿಗೊಂದು ಮರ – ಶಾಲೆಗೊಂದು
2012 ರ ಫೆಬ್ರವರಿ 16, 17 ಮತ್ತು 18 ರಂದು ನಡೆದ ರಜತಮಹೋತ್ಸವ ಸಮಾರಂಭದ ಸಂಕ್ಷಿಪ್ತ ವರದಿ
ವಿವೇಕಾನಂದ ತಾಂತ್ರಿಕ ವಿದ್ಯಾಲಯದ ರಜತಮಹೋತ್ಸವ ಸಮಾರಂಭವು ಶ್ರೀ ಧಾತೃನಾಮ ಸಂವತ್ಸರದ ಮಾಘ ಶುದ್ಧ ದಶಮಿ, ಎಕಾದಶಿ ಹಾಗೂ ದ್ವಾದಶಿಗಳಂದು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಔಚಿತ್ಯಪೂರ್ಣವಾಗಿ ಬಹಳ ಸಂಭ್ರಮದಿಂದ ಜರಗಿತು. ದಿನಾಂಕ : 16-02-2012 – ಗುರುವಾರ ತಾಂತ್ರಿಕ ವಿದ್ಯಾಲಯದ ರಜತಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವು ಮೂಡಬಿದ್ರೆಯ ಶ್ರೀ ದಿಗಂಬರ ಜೈನಮಠದ ಭಾರತಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮೀಜಿಗಳಿಂದ ಪೂರ್ವಾಹ್ನ 11.00ಗಂಟೆಗೆ ವಿದ್ಯುಕ್ತವಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಹರಸಲು ಬಂದ ಶ್ರೀಗಳನ್ನು ಹಾಗೂ ಗಣ್ಯರನ್ನು