News and Events
ಯಕ್ಷಗಾನ ಬಯಲಾಟ
ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ನ ಸರ್ವ ಸಿಬ್ಬಂದಿಗಳ ವತಿಯಿಂದ ದಿನಾಂಕ: 29-12-2013ರಂದು ಪಾಲಿಟೆಕ್ನಿಕ್ನ ವಠಾರದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಸಂಪೂರ್ಣ ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ನ ಆರಂಭದ ಹಂತದಲ್ಲಿ ಪ್ರಾಚಾರ್ಯರಾಗಿದ್ದ ಶ್ರೀಯುತ ಎಕ್ಕಡ್ಕ ವಿಷ್ಣು ಭಟ್, ಶ್ರೀಕ್ಷೇತ್ರ ಕಟೀಲು ಇಲ್ಲಿನ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ, ಕಟೀಲು ಮೇಳದ ವ್ಯವಸ್ಥಾಪಕರಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರುಗಳನ್ನು ಶಾಲು ಹೊದಿಸಿ,
2013-14ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ
28-09-2013 ನಡೆದ ವಿವೇಕಾನಂದ ಪಾಲಿಟೆಕ್ನಿಕ್ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತೃತೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ವಿವೇಕ ಎಸ್ ಇವರು ಅಧ್ಯಕ್ಷರಾಗಿ, ತೃತೀಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆಶಿತ್ ಶೆಟ್ಟಿ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿಯಾಗಿ ತೃತೀಯ ಕಂಪ್ಯೂಟರ್ ಸೈನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕು. ಶಿಲ್ಪಾ ಹೆಗ್ಡೆ ಆಯ್ಕೆಯಾದರು. ಈ ಚುನಾವಣೆಯನ್ನು ಉಪಪ್ರಾಂಶುಪಾಲರಾದ ಶ್ರೀ ಹರೇಕೃಷ್ಣ ಬಿ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ಭಟ್, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳೀಧರ ಎಸ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ
ಓಣಂ ದಿನಾಚರಣೆ
ಕೇರಳ ಜನಪ್ರಿಯ ಧಾರ್ಮಿಕ ಹಬ್ಬವಾದ ಓಣಂ ಅನ್ನು 16-09-2013ರಂದು ಆಚರಿಸಲಾಯಿತು. ವಿದ್ಯಾರ್ಥಿಗಳು ಪೂಕಳಂ ರಚಿಸದರು. ಈ ಪೂಕಳಂನ ಮುಂಭಾಗದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಂ. ಗೋಪಿನಾಥ ಶೆಟ್ಟಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಹರೇಕೃಷ್ಣ ಬಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿರಾಮ ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ರೋಹಿತ್ ಹೆಚ್.ಪಿ. ಹಾಗೂ ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀಚಂದ್ರಕುಮಾರ್ ದೀಪ ಬೆಳಗಿಸಿದರು. ಓಣಂ ಆಚರಣೆಯ ಮಹತ್ವದ ಬಗ್ಗೆ ಪ್ರಾಚಾರ್ಯರಾದ ಶ್ರೀ ಎಂ.ಗೋಪಿನಾಥ
ಇಂಜಿನಿಯರ್ಸ್ ದಿನಾಚರಣೆ
14-09-2013ರಂದು ಶಿಕ್ಷಕರ ಹಾಗೂ ಇಂಜಿನಿಯರ್ಸ್ ದಿನವನ್ನು ಜಂಟಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ ಪುತ್ತೂರಿನ ಹಿರಿಯ ಇಂಜಿನಿಯರ್ ಶ್ರೀ ವೇಣುಗೋಪಾಲ ಶೆಣೈ ಅವರು ದೀಪಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು ಹಾಗೂ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಎಂ. ಗೋಪಿನಾಥ ಶೆಟ್ಟಿಯವರು ವಹಿಸಿದರು. ವೇದಿಕೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ಹರೇಕೃಷ್ಣ ಬಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ಚಂದ್ರಕುಮಾರ್ ಉಪಸ್ಥಿತರಿದ್ದರು. ಈ
ವಿವೇಕಾನಂದ ಸ್ಮೃತಿ ಕಾರ್ಯಕ್ರಮ
ದಿನಾಂಕ 07-09-2013ರಂದು ವಿವೇಕಾನಂದರ ವಿಚಾರ ಹಾಗೂ ಆದರ್ಶಗಳ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಎಂ.ಗೋಪಿನಾಥ ಶೆಟ್ಟಿ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸು.ರಾಮಣ್ಣ ಅವರು ವಿವೇಕಾನಂದರ ಆದರ್ಶ ಹಾಗೂ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಭಾರತವನ್ನು ಬಲಿಷ್ಠರಾಷ್ಟ್ರವನ್ನಾಗಿಸಲು ಯುವ ವೃಂದ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಭವ್ಯ ಇತಿಹಾಸವುಳ್ಳ ಭಾರತವು ಪ್ರಪಂಚಕ್ಕೆ ದಾರಿದೀಪವಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಪ್ರತೀಯೊಬ್ಬರ ಜೀವನದಲ್ಲಿಯೂ ತಿರುವು ಇರುತ್ತದೆ, ಅದನ್ನು
ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
10-07-2013ರಂದು ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಿಕ್ಷಕ -ರಕ್ಷಕ ಸಮಾವೇಶ ಕಾರ್ಯಕ್ರಮ ಗಣಹೋಮದೊಂದಿಗೆ ಪ್ರಾರಂಭವಾಯಿತು. ಕೇಶವ ಸಂಕಲ್ಪದಲ್ಲಿ ನಡೆದ ಈ ಸಮಾವೇಶದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಗೋಪಿನಾಥ್ ಶೆಟ್ಟಿಯವರು ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಸಂಚಾಲಕರು ಹಾಗೂ ಪುತ್ತೂರಿನ ಮಾಜಿ ಶಾಸಕಾರಾದ ಶ್ರೀಯುತ ಕೆ ರಾಮ ಭಟ್ ಉರಿಮಜಲು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ‘ವಿವೇಕಾನಂದರ ಆದರ್ಶವನ್ನು ಬೆಳೆಸಿಕೊಳ್ಳುವುದೇ ನಿಜವಾದ ವಿದ್ಯಾಬ್ಯಾಸ. ಜೊತೆಗೆ ಸದ್ಬುದ್ಧಿಗಳನ್ನು ಬೆಳೆಸಿಕೊಂಡು ದೇಶದ ಚಿಂತನೆಯನ್ನು ಮಾಡುವಂತಹ ಸತ್ಪ್ರಜೆಯಾಗಿ ಮೂಡಿ ಬನ್ನಿ’ ಎಂದು
ಅಡಳಿತ ಮಂಡಳಿಯ ನೂತನ ಸಿಬ್ಬಂದಿ ಪ್ರತಿನಿಧಿ ಆಯ್ಕೆ
ತಾ 05.07.2013ರಂದು ನಡೆದ ಪಾಲಿಟೆಕ್ನಿಕಿನ ಸಿಬ್ಬಂದಿ ವರ್ಗದ ಸಭೆಯು ಶ್ರೀ ರವಿರಾಮ ಇವರನ್ನು ಆಡಳಿತ ಮಂಡಳಿಗೆ ನೂತನ ಸಿಬ್ಬಂದಿ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ಇವರ ಹೆಸರನ್ನು ಶ್ರೀಯುತ ಚಂದ್ರಕುಮಾರ್, ವಿದ್ಯಾರ್ಥಿ ಕ್ಷೇಮಪಾಲಕರು ಸೂಚಿಸಿದರೆ ಶ್ರೀಯುತ ಹರೇಕೃಷ್ಣ ಬಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಅನುಮೋದಿಸಿದರು. ಇತರ ಸಿಬ್ಬಂದಿಗಳು ಧ್ವನಿಮತದಿಂದ ಇವರ ಆಯ್ಕೆಯನ್ನು ಅನುಮೋದಿಸಿದರು. ಶ್ರೀಯತ ರವಿರಾಮ ಇವರು ಈ ಸಂಸ್ಥೆ ಪ್ರಾರಂಭವಾದಂದಿನಿಂದ ಇಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಙಾನ ವಿಭಾಗದ ಶ್ರೀ ಹರೀಶ್ ಭಟ್ ಇವರು
ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ನ ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಿಕ್ಷಕ -ರಕ್ಷಕ ಸಮಾವೇಶ ಕಾರ್ಯಕ್ರಮ ಗಣಹೋಮದೊಂದಿಗೆ ಪ್ರಾರಂಭವಾಯಿತು. ಕೇಶವ ಸಂಕಲ್ಪದಲ್ಲಿ ನಡೆದ ಈ ಸಮಾವೇಶದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಗೋಪಿನಾಥ್ ಶೆಟ್ಟಿಯವರು ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಸಂಸ್ಥೆಯ ಸ್ಥಾಪಕ ಸಂಚಾಲಕರು ಹಾಗೂ ಪುತ್ತೂರಿನ ಮಾಜಿ ಶಾಸಕಾರಾದ ಶ್ರೀಯುತ ಕೆ ರಾಮ ಭಟ್ ಉರಿಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿವೇಕಾನಂದರ ಆದರ್ಶವನ್ನು ಬೆಳೆಸಿಕೊಳ್ಳುವುದೇ ನಿಜವಾದ ವಿದ್ಯಾಬ್ಯಾಸ. ಜೊತೆಗೆ ಸದ್ಬುದ್ಧಿಗಳನ್ನು ಬೆಳೆಸಿಕೊಂಡು ದೇಶದ ಚಿಂತನೆಯನ್ನು ಮಾಡುವಂತಹ ಸತ್ಪ್ರಜೆಯಾಗಿ ಮೂಡಿ
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ -2013
ವಿದ್ಯಾರ್ಥಿಗಳು ಒಳ್ಳೆಯ ಕನಸು ಕಂಡು ಸತತ ಪ್ರಯತ್ನ ಮಾಡಿದಾಗ ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸುಲಭ ಸಾಧ್ಯ ಎಂದು ಉಚ್ಛನ್ಯಾಯಾಲಯದ ವಕೀಲ, ಯೂತ್ ಫಾರ್ ನೇಷನ್ ಸಂಸ್ಥೆಯ ರಾಷ್ಟ್ರಾಧ್ಯಕ್ಷರಾದ ಪದ್ಮಪ್ರಸಾದ್ ಹೆಗ್ಡೆ ಮಂಗಳೂರು ಅವರು ಹೇಳಿದರು. ಅವರು ನೆಹರು ನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎ. ೬ರಂದು ನಡೆದ ಸಂಸ್ಥೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜಿನ ಹೊರಗೆ ಬಂದ ಮೇಲೆ ಕೆಲಸಕ್ಕಾಗಿ ಇತರರನ್ನು ಅವಲಂಭಿಸದೆ ಸ್ವ ಉದ್ಯೋಗದ
ANNUAL SPORTS MEET 2012-2013
Annual sports meet for the year 2012-2013 was held on 23.03.2013. Prof. A V Narayan, President of Vivekananda Polytechnic’s Governing Council inaugurated the meet by hoisting the flag. Student President Mr. Avinash Bangera welcomed the gathering, Mr. Raviram, HOD Civil delivered the Vote of Thanks and Lady Representative Miss. Kavya of 3rd Civil played host