News and Events
ಸ್ವದೇಶೀ ಸಂಭ್ರಮ
ಗಾಯತ್ರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರು, ಇವರ ಸಹಯೋಗದೊಂದಿಗೆ ಅ.30 ರಿಂದ ನ.1 ರವರೆಗೆ ಪುತ್ತೂರು ಮಹಾಲಿಂಗೇಶ್ವರ ಸಭಾಭವನ, ನಟರಾಜ ವೇದಿಕೆಯಲ್ಲಿ ಸ್ವದೇಶೀ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಅ. 30 ರಂದು ಸನ್ಮಾನ್ಯ ಶಾಸಕರಾದ ಶ್ರೀ. ಸಂಜೀವ ಮಠಂದೂರು ಇವರು ಉದ್ಘಾಟಿಸಿದ ಈ ಮೇಳದಲ್ಲಿ, ಸ್ವದೇಶೀ ಕರಕುಶಲ ವಸ್ತುಗಳು, ತಿನಿಸುಗಳು ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಜನರನ್ನು ಆಕರ್ಷಿಸಿದವು. ಶ್ರೀ.
ವಿವೇಕಾನಂದ ಪಾಲಿಟೆಕ್ನಿಕ್ಗೆ ʼಜನೌಷಧ ಪ್ರಬುದ್ಧ ಪ್ರಶಸ್ತಿʼ
ಪುತ್ತೂರು ತಾಲೂಕಿನ ಜನೌಷಧ ಕೇಂದ್ರಗಳ ಸ್ಥಾಪನೆಗೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ “ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು” ಭಾರತೀಯ ಜನೌಷಧ ಪ್ರಬುದ್ಧ ಪ್ರಶಸ್ತಿಗೆ ಭಾಜನವಾಯಿತು. BPPI ಯೊಂದಿಗೆ 10 ಜನೌಷಧ ಕೇಂದ್ರಗಳ ಸ್ಥಾಪನೆಗೆ ಒಡಂಬಡಿಕೆಯನ್ನು ಮಾಡಿಕೊಂಡು 20 ಜನೌಷಧ ಕೇಂದ್ರಗಳನ್ನು ಸಂಪೂರ್ಣ ಸಹಕಾರದೊಂದಿಗೆ ತೆರೆಯಲಾಯಿತು. ಇಡೀ ಭಾರತದಲ್ಲಿ ಜನೌಷಧ ಕೇಂದ್ರಗಳ ಸ್ಥಾಪನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಏಕೈಕ ಖಾಸಗಿ ವಿದ್ಯಾಸಂಸ್ಥೆಯಾಗಿ ಗುರುತಿಸಿಕೊಂಡಿತು. ಆರ್ಹವಾಗಿ ಭಾರತೀಯ ಜನೌಷಧ ಪ್ರಬುದ್ಧ ಪ್ರಶಸ್ತಿಯನ್ನು ಇಂದು ಕೇಂದ್ರ ಸರ್ಕಾರದ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನಗಳ ರಾಜ್ಯ
ಆಯುಧ ಪೂಜೆ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ವರ್ಷಂಪ್ರತಿ ನಡೆಯುವಂತೆ ಆಯುಧ ಪೂಜಾ ಕಾರ್ಯಕ್ರಮವು ಪುರೋಹಿತರಾದ ವೇ.ಮೂ. ನೂಜಿಮನೆ ರಾಮಕೃಷ್ಣ ಭಟ್ ಮಿತ್ತೂರು ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಇದರ ಅಂಗವಾಗಿ ಸರಸ್ವತಿ ಪೂಜೆ, ಪ್ರಯೋಗಾಲಯಗಳ ಪೂಜೆ, ವಾಹನ ಪೂಜೆ ಮತ್ತು ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ – ಗೀತಾ ಸಾಹಿತ್ಯ ಸಂಭ್ರಮ ಮುಂತಾದ ಕಾರ್ಯಕ್ರಮಗಳು ನಡೆಯಲ್ಪಟ್ಟಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್, ಎ.ವಿ. ನಾರಾಯಣ್, ವತ್ಸಲಾ ರಾಜ್ಙಿ, ಮೀನಾಕ್ಷಿ ಮಾತಾಜಿ, ಕೃಷ್ಣ ನಾಯ್ಕ ಅಗರ್ತಬೈಲು,
ವಿದ್ಯಾರ್ಥಿ ಜೀವನದಲ್ಲಿ ನಾವು ಗಳಿಸಿದ್ದನ್ನು ಮತ್ತೆ ಸಮಾಜಕ್ಕೆ ನೀಡುವುದು ನಮ್ಮ ಜವಾಬ್ದಾರಿ – ಕಜಂಪಾಡಿ ಸುಬ್ರಹ್ಮಣ್ಯ ಭಟ್
ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಗಣಪತಿ ಹೋಮ ಹಾಗೂ ಸರಸ್ವತಿ ಆರಾಧನಾ ಕಾರ್ಯಕ್ರಮದೊಂದಿಗೆ ದಿನಾಂಕ: 7-10-2021 ರಂದು ನಡೆಸಲಾಯಿತು. ಸುಮಾರು 200 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇದರ ಅಂಗವಾಗಿ ಕೇಶವ ಸಂಕಲ್ಪ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಭೋದನ್ ಇದರ ಅಖಿಲ
ಆತ್ಮನಿರ್ಭರ ಭಾರತ ಕಲ್ಪನೆಯ ಸ್ವಾವಲಂಬಿಗಳು ತಯಾರಿಸಿದ ಉತ್ಪನ್ನ ಪ್ರದರ್ಶನದ ಉದ್ಭಾಟನಾ ಸಮಾರಂಭ
ಕೊರೋನಾ ಪಿಡುಗಿನ ಮೊದಲನೇ ಅಲೆ ದೇಶದಾದ್ಯಂತ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜನತೆ ಇದ್ದ ಕೆಲಸಗಳನ್ನು ಕಳೆದು ಕೊಂಡು ಮತ್ತೆ ತಾಯಿನಾಡಿನತ್ತ ಮುಖ ಮಾಡಿರುವ ಸಂದರ್ಭದಲ್ಲಿ ಅಂತಹವರ ಬಾಳಿನಲ್ಲಿ ಆಶಾಕಿರಣವನ್ನು ತುಂಬುವ ದೃಷ್ಠಿಯಿಂದ ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಗ್ರಾಮವಿಕಾಸ ಸಮಿತಿ, ಮಂಗಳೂರು ಮತ್ತು ಸಹಕಾರ ಭಾರತಿ, ದಕ್ಷಿಣ ಕನ್ನಡ ಇವುಗಳ ಸಹಕಾರದಿಂದ ಕಾಸರಗೋಡು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡದ 20 ಪ್ರಮುಖ ಕೇಂದ್ರಗಳಲ್ಲಿ ಸಂಯೋಜಿಸಿದ ಉದ್ಯೋಗ ನೈಪುಣ್ಯ ತರಬೇತಿಯಲ್ಲಿ 4536 ಜನರು
ಎರಡನೇ ಸುತ್ತಿನ ಲಸಿಕಾ ಅಭಿಯಾನ
ವಿವೇಕಾನಂದ ಪಾಲಿಟೆಕ್ನಿಕ್ ನೆಹರುನಗರದಲ್ಲಿ ಎರಡನೇ ಸುತ್ತಿನ ಕೋವಿಡ್ ಲಸಿಕಾ ಅಭಿಯಾನ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯಗಳ ಜಂಟಿ ಸಹಯೋಗದೊಂದಿಗೆ ನಡೆಯಿತು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ೪೦೦ ಲಸಿಕೆಗಳನ್ನು ನೀಡಲಾಯಿತು.
ಬೃಹತ್ ಲಸಿಕಾ ಅಭಿಯಾನ
ಲಸಿಕಾ ಅಭಿಯಾನದ ಮೂಲಕ ಕೋವಿಡ್ ಮುಕ್ತ ಸಮಾಜ ನಿರ್ಮಿಸೋಣ – ಸಂಜೀವ ಮಠಂದೂರು ಪುತ್ತೂರು: ಈಗಾಗಲೇ ಪುತ್ತೂರು ತಾಲೂಕಿನಲ್ಲಿರುವ ಎಲ್ಲಾ 18+ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಉಳಿದವರಿಗೆ ಶೀಘ್ರವಾಗಿ ಲಸಿಕೆ ವಿತರಣೆ ಆಗಲಿದೆ. ಈ ಅಭಿಯಾನದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ನಗರ ಸಭೆಯವರು ಹಾಗೂ ಇತರ ಇಲಾಖೆಗಳು ಕೈಜೋಡಿಸಿವೆ. ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ಬೇಕಾಗಿರುವ ಕಟ್ಟಡವನ್ನು ಮಂಜೂರಾತಿಗಾಗಿ ಕಳುಹಿಸಿಕೊಡಲಾಗಿದೆ. ಈಗಾಗಲೇ ಮೂಲಭೂತ ಸೌಕರ್ಯವನ್ನು ಸಾಕಷ್ಟು ವೈದ್ಯರನ್ನು ನೇಮಕಮಾಡಿಕೊಳ್ಳುವ
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ’ಖಿಂಈಇ – ಇPಆ’ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ, ಬ್ಯಾರಿಸ್ ಪಾಲಿಟೆಕ್ನಿಕ್ ಮಂಗಳೂರು ಮೊದಲಾದ ಪಾಲಿಟೆಕ್ನಿಕ್ಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 125 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ’ಟಫೇ
ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರ
ಪುತ್ತೂರು: ಯಾವಾಗಲೂ ರಸ್ತೆ ನಿಯಮಗಳನ್ನು ಪಾಲಿಸಿ, ಎಲ್ಲಿಯಾದರೂ ರಸ್ತೆ ಅವಘಡ ಕಂಡು ಬಂದರೆ ತಕ್ಷಣ ಸ್ಪಂದಿಸಿ, ತುರ್ತು ಚಿಕಿತ್ಸೆ ನೀಡಲು ಸಹಕರಿಸಿ, ದಯವಿಟ್ಟು ಮೊಬೈಲ್ ನಲ್ಲಿ ಪೋಟೋ ತೆಗೆಯಬೇಡಿ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಆನಂದ ಗೌಡ ಅವರು ವಿವೇಕಾನಂದ ಪಾಲಿಟೆಕ್ನಿಕ್ನ ತೃತೀಯ ಅಟೋಮೋಬೈಲ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ವಾಹನ ಚಾಲನೆಯ ಹೊಸ ಕಾಯಿದೆಗಳು, ನಿಯಮಗಳು, ವಾಹನ ನೋಂದಣಿ, ವಾಹನ ಪರವಾನಿಗೆ ಹಾಗೂ ಅದರ ನವೀಕರಣ, ರಸ್ತೆ ಸುರಕ್ಷತೆ, ವೇಗದ ಮಿತಿ, ಸಿಗ್ನಲ್ಗಳು,
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಶಾಖೆಯನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ‘TAFE – Tractor Division’ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಪ್ರಸನ್ನ ಪಾಲಿಟೆಕ್ನಿಕ್ ಬೆಳ್ತಂಗಡಿ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ ಮೊದಲಾದ ಪಾಲಿಟೆಕ್ನಿಕ್ಗಳಿಂದ ಬಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಸುಮಾರು 200 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.