News and Events
ಪೂಲ್ ಕ್ಯಾಂಪಸ್ ನೇಮಕಾತಿ
ಪುತ್ತೂರು: ಬೆಂಗಳೂರಿನ ’ಟಫೇ – ಇ.ಪಿ.ಡಿ. ಲಿಮಿಟೆಡ್’ ಸಂಸ್ಥೆಯು ಭೇಟಿ ನೀಡಿ ಪೂಲ್ ಕ್ಯಾಂಪಸ್ ನೇಮಕಾತಿ ನಡೆಸಿತು. ಇದರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಸುತ್ತಮುತ್ತಲಿನ ಪಾಲಿಟೆಕ್ನಿಕ್ಗಳಾದ ಕೆ.ವಿ.ಜಿ. ಪಾಲಿಟೆಕ್ನಿಕ್ ಸುಳ್ಯ, ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ, ಪಿ.ಎ. ಪಾಲಿಟೆಕ್ನಿಕ್ ಮಂಗಳೂರು, ಪ್ರಸನ್ನ ಪಾಲಿಟೆಕ್ನಿಕ್ ಬೆಳ್ತಂಗಡಿ, ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆ, ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆ ಮೊದಲಾದ ಪಾಲಿಟೆಕ್ನಿಕ್ಗಳಿಂದ ಬಂದ ಇಲೆಕ್ಟ್ರೋನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಅರ್ಹ ೨೨೫ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಟಫೇ ಸಂಸ್ಥೆಯ
ವಿದ್ಯಾರ್ಥಿಗಳಿಗೆ ಭಾರತೀಯ ಜೀವ ವಿಮಾ ನಿಗಮದ ಬಗ್ಗೆ ಮಾಹಿತಿ
ಪುತ್ತೂರು: ಭಾರತೀಯ ಜೀವ ವಿಮಾ ನಿಗಮ, ಪುತ್ತೂರು ಶಾಖೆ ಇದರ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭಾರತೀಯ ಜೀವ ವಿಮಾ ನಿಗಮ, ಪುತ್ತೂರು ಶಾಖೆ ಇದರ ವ್ಯವಸ್ಥಾಪಕರಾದ ಶ್ರೀ ಚಂದ್ರಶೇಖರ್ ಹಾಗೂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಕೆ. ಪರಮೇಶ್ವರಿ ಇವರು ಭಾರತೀಯ ಜೀವ ವಿಮಾ ನಿಗಮದಲ್ಲಿರುವ ವಿವಿಧ ಉದ್ಯೋಗಾವಕಾಶಗಳು ಹಾಗೂ ಎಲ್.ಐ.ಸಿ ಪ್ರತಿನಿಧಿಗಳಿಗೆ ಇರುವ ಪ್ರಯೋಜನಗಳು ಹಾಗೂ ಅನುಕೂಲತೆಗಳು ಮತ್ತು ಭಾರತೀಯ ಜೀವ ವಿಮಾ ನಿಗಮದಲ್ಲಿ ವಿವಿಧ ಉದ್ಯೋಗ ಪಡೆಯಲು ಬೇಕಾಗುವ ಅರ್ಹತೆಗಳ ಬಗ್ಗೆ
ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ
ಪುತ್ತೂರು: ವಿದ್ಯಾರ್ಥಿಗಳು ಸರಕಾರಿ ಪಾಲಿಟೆಕ್ನಿಕ್, ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 43ನೇ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಎರಡನೇ ಬಾರಿ ಅಮೋಘ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದಲ್ಲಿ ತೃತೀಯ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾದ ಲೋಹಿತ್ 100 ಮೀ ಓಟದ ಸ್ಪರ್ಧೆ, 200 ಮೀ ಓಟದ ಸ್ಪರ್ಧೆ ಹಾಗೂ 4×100 ಮೀ ರಿಲೇಯಲ್ಲಿ ಚಿನ್ನದ ಪದಕ ಮತ್ತು 4×400 ಮೀ ರಿಲೇಯಲ್ಲಿ ಬೆಳ್ಳಿ ಪದಕ, ತೃತೀಯ ವರ್ಷ
ಯುವ ರೆಡ್ಕ್ರಾಸ್ ಘಟಕದ ವತಿಯಿಂದ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ
ಸದೃಡ ಸಮಾಜಕ್ಕಾಗಿ ಆರೋಗ್ಯವಂತ ಜೀವನ – ಡಾ| ರಾಮಚಂದ್ರ ಭಟ್ ಪುತ್ತೂರು: ಯುವ ರೆಡ್ಕ್ರಾಸ್ ಘಟಕದ ವತಿಯಿಂದ ಆಯ್ದ ಸ್ವಯಂಸೇವಕರಿಗೆ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಎಂಬ ವಿಷಯದಲ್ಲಿ ತರಬೇತಿ ಶಿಬಿರವು ವಿವೇಕಾನಂದ ಪಾಲಿಟೆಕ್ನಿಕ್ನ ಎ.ವಿ.ಹಾಲ್ನಲ್ಲಿ ನಡೆಯಿತು. ಈ ಕಾರ್ಯಕ್ರವವನ್ನು ಸೈಂಟ್ ಜಾನ್ ಅಂಬ್ಯುಲೆನ್ಸ್ ಅಸೋಸಿಯೆಷನ್ ನ್ಯೂ ಡೆಲ್ಲಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಇದರ ಹಿರಿಯ ತರಬೇತುದಾರರಾದ ಡಾ| ರಾಮಚಂದ್ರ ಭಟ್ ನೆರವೇರಿಸಿ ಕೊಟ್ಟರು. ಇವರು ಮಾತನಾಡುತ್ತಾ ಸದೃಡ ಸಮಾಜವನ್ನು ನಿರ್ಮಾಣ ಮಾಡುವಂತಹ ಕಾಳಜಿ ಪ್ರತಿಯೊಬ್ಬ
ಹುತಾತ್ಮರ ದಿನದ ಆಚರಣೆ
ಪುತ್ತೂರು : ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಜನವರಿ 30 ರಂದು ಹುತಾತ್ಮರ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಅವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಜಲಿಯನ್ ವಾಲಾಭಾಗ್ ಘಟನೆಗಳನ್ನು ನೆನಪಿಸುತ್ತಾ ಸಂಗೊಳ್ಳಿ ರಾಯಣ್ಣ, ವೀರ ಸಾವರ್ಕರ್, ಝಾನ್ಸಿರಾಣಿ ಲಕ್ಷ್ಮಿಬಾಯಿ, ರಾಣಿ ಅಬ್ಬಕ್ಕ, ಚಂದ್ರಶೇಖರ ಆಜಾದ್ ಮುಂತಾದವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಮಹಾತ್ಮಾಗಾಂಧಿಯವರ ಪುಣ್ಯತಿಥಿಯಂದು ರಾಷ್ಟ್ರೀಯ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ ಎಂದರು. ಎರಡು ನಿಮಿಷದ ಮೌನಚರಣೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ
ಬೆಂಕಿ ಅವಘಡದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
ಪುತ್ತೂರು: ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು ಇದರ ಅಂಗಸಂಸ್ಥೆಯಾದ ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ಸೆಂಟರ್ನ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳಿಗೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ಸೆಂಟರ್ನ ಸಂಪನ್ಮೂಲ ವ್ಯಕ್ತಿನಿವೃತ್ತ ವಾಯುಸೇನಾಧಿಕಾರಿ ಡಾ| ರಾಜೇಶ್ ಶೆಟ್ಟಿ ಇವರು ಬೆಂಕಿ ಅವಘಡ ನಡೆಯಲು ಕಾರಣ ಮತ್ತು ಆ ಸಮಯದಲ್ಲಿ ನಾವು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ವಿವಿಧ ಫೈರ್ ಎಂಡ್ ಸೇಪ್ಟಿ
ಬೆಂಕಿ ಅವಘಡದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
ಪುತ್ತೂರು: ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು ಇದರ ಅಂಗಸಂಸ್ಥೆಯಾದ ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ಸೆಂಟರ್ನ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳಿಗೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ಸೆಂಟರ್ನ ಸಂಪನ್ಮೂಲ ವ್ಯಕ್ತಿನಿವೃತ್ತ ವಾಯುಸೇನಾಧಿಕಾರಿ ಡಾ: ರಾಜೇಶ್ ಶೆಟ್ಟಿ ಇವರು ಬೆಂಕಿ ಅವಘಡ ನಡೆಯಲು ಕಾರಣ ಮತ್ತು ಆ ಸಮಯದಲ್ಲಿ ನಾವು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ವಿವಿಧ ಫೈರ್ ಎಂಡ್ ಸೇಪ್ಟಿ
ಅತಿಥಿ ಉಪನ್ಯಾಸ
ಪುತ್ತೂರು: ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಟೆಕ್ ಮಸ್ಟರ್ ಐಟಿ ಸೊಲ್ಯೂಶನ್, ಮಂಗಳೂರು ಇದರ ಸಹಸಂಸ್ಥಾಪಕ ಮಣಿಕಂಠ ಎ ನಾಯರ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಹೆಡ್ ಉಷಾ ಭಟ್ ಇವರು ಮಾಹಿತಿ ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಉಪನ್ಯಾಸ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ಕಲಿಕೆ ಹಾಗೂ ಹೊಸ ಹೊಸ ತಂತ್ರಜ್ಞಾನಗಳಾದ ಬಿಗ್ ಡಾಟ, ಎಐ, ಐಓಟಿ, ವೆಬ್ ತಂತ್ರಜ್ಞಾನಗಳಿಗೆ ಇರುವ ವಿಫುಲ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ
ಅತಿಥಿ ಉಪನ್ಯಾಸ
ಪುತ್ತೂರು: ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು ಇದರ ಜೂನಿಯರ್ ಸೆಕ್ಸನ್ ಆಫೀಸರ್ ನರಸಿಂಹ ನಾಯಕ್ ಇವರು ಉಪನ್ಯಾಸ ನಡೆಸಿಕೊಟ್ಟರು. ಇವರು ಡಿಪ್ಲೋಮ ವಿದ್ಯಾರ್ಥಿಗಳಿಗೆ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿರುವ ಉದ್ಯೋಗವಕಾಶ ಮತ್ತು ಅಪ್ರೆಂಟಿಸಿಪ್ ತರಬೇತಿ ಪಡೆಯಲು ಇರಬೇಕಾದ ಅರ್ಹತೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಅವರು ತಾವು ಈ ಕಾಲೇಜಿನಲ್ಲಿ ಕಳೆದ ನೆನಪುಗಳನ್ನು ಮೆಲುಕುಹಾಕುತ್ತಾ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ
ಅತಿಥಿ ಉಪನ್ಯಾಸ ಮಾಲಿಕೆ
ಪುತ್ತೂರು: ತೃತೀಯ ಅಟೋಮೋಬೈಲ್ ಮತ್ತು ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ಶರಾವತಿಯ ವಿವಿಧ ಜಲ ವಿದ್ಯುತ್ ಕೇಂದ್ರಗಳ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮ, ಜೊಗ್ಫಾಲ್ಸ್ ಇದರ ಸಹಾಯಕ ಇಂಜಿನಿಯರ್ ನಾಗರಾಜ್ ಎಂ. ಜೋಶಿ ಇವರು ಉಪನ್ಯಾಸ ನಡೆಸಿಕೊಟ್ಟರು. ಶರಾವತಿಯ ವಿವಿಧ ಜಲ ವಿದ್ಯುತ್ ಕೇಂದ್ರಗಳು ಮತ್ತು ಅಲ್ಲಿ ವಿದ್ಯುತ್ ಹೇಗೆ, ಎಷ್ಟು ಉತ್ಪಾದನೆಯಾಗುತ್ತದೆ, ಅಲ್ಲಿ ಬಳಸುವ ವಿವಿಧ ಟರ್ಬೈನ್ಗಳು ಹಾಗೂ ವಿದ್ಯುತ್ನ ಮಿತ ಬಳಕೆಯ ಅಗತ್ಯತೆ ಮತ್ತು ವಿದ್ಯುತ್ ದುರ್ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವಿವೇಕಾನಂದ ಪಾಲಿಟೆಕ್ನಿಕ್ನ