• 08251 231197
  • vptputtur@yahoo.co.in

ಪ್ರಯೋಗಾಲಯ ಸಿಬ್ಬಂದಿಗಳ ಪುನಶ್ಚೇತನ ಕಾರ್ಯಾಗಾರ

ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಸಾರವನ್ನು ಕಲಿಸುವ ಸಾಧಕರು ನಾವಾಗಬೇಕು ಅಚ್ಚ್ಯುತನಾಯಕ್ ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪ್ರಶಿಕ್ಷಣ ಘಟಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದೊಂದಿಗೆ ಸಂಸ್ಥೆಯ ಪ್ರಯೋಗಾಲಯ ನಿರ್ವಾಹಕರು ಹಾಗೂ ಸಹಾಯಕರ ಪುನಶ್ಚೇತನ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿಗಳಾದ ಎಂ. ಕೃಷ್ಣ ಭಟ್ ಮಾತನಾಡಿ, ವಿವೇಕಾನಂದ ವಿದ್ಯಾವರ್ದಕ ಸಂಘ ಒಂದು ಪ್ರಯೋಗಶಾಲೆ. ಈ ಪ್ರಯೋಗಶಾಲೆಯ ಪ್ರಯೋಗಾಲಯಗಳ ಸಿಬ್ಬಂದಿಗಳು ನೀವೆಲ್ಲಾ, ವಿದ್ಯಾರ್ಥಿಗಳ ವಿದ್ಯಾರ್ಜನೆಯ

Read More

ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ವೃಕ್ಷಾರೋಪಣ 2019

ಪುತ್ತೂರು: ಗ್ರಾಮ ವಿಕಾಸ ಯೋಜನೆಯ ಆಶ್ರಯದಲ್ಲಿ ವೃಕ್ಷಾರೋಪಣ 2019 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪಡ್ಡಾಯೂರು ಹಾಗೂ ಪಡ್ನೂರು ಗ್ರಾಮಗಳಲ್ಲಿ ಗಿಡನೆಡುವ ಮೂಲಕ ಉದ್ಘಾಟಿಸಲಾಯಿತು. ಪಡ್ಡಾಯೂರು ಭಜನಾ ಮಂದಿರದಲ್ಲಿ ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಮಣಿ ಡಿ ಗಾಣಿಗ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಪಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮವಿಕಾಸ ಯೋಜನೆಯ ಸಂಚಾಲಕರಾದ ಶ್ರೀಯುತ ಶ್ರೀನಿವಾಸ್ ಪೆರೋಡಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ಪಡ್ಡಾಯೂರು

Read More

ಕಾರ್ಗಿಲ್ ವಿಜಯ ದಿವಸ್

ಕಾರ್ಗಿಲ್ ವಿಜಯ ದಿವಸ್ ಒಂದು ದಿನದ ಸಂಭ್ರಮವಲ್ಲ – ಆದರ್ಶ ಗೋಖಲೆ ಪುತ್ತೂರು: ಕಾರ್ಗಿಲ್ ವಿಜಯ ದಿವಸ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಆದರ್ಶ ಗೋಖಲೆ ನಡೆಸಿಕೊಟ್ಟರು. ಇವರು ಮಾತನಾಡುತ್ತಾ, 1999 ರ ಜುಲೈ 26 ರಂದು ಕಾರ್ಗಿಲ್ ಯುದ್ಧ ಗೆದ್ದ ದಿನ. ಈ ದಿನ ನಮ್ಮೆಲ್ಲಾ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಒಂದೆಡೆ ಶಾಂತಿ ಮಂತ್ರ ಜಪಿಸುತ್ತಲೇ ಮತ್ತೊಂದೆಡೆ ಪಾಕಿಸ್ತಾನ ಸೇನೆ ತನ್ನ ಸೈನಿಕರನ್ನು ದೇಶದ ಗಡಿಯೊಳಗೆ ನುಗ್ಗಿಸಿತ್ತು. ನಮ್ಮ ವೀರ ಸೈನಿಕರು ತಮ್ಮ ಪ್ರಾಣವನ್ನೇ ಪಣಕಿಟ್ಟು ಕಾರ್ಗಿಲ್

Read More

ಶಾಲಾ ವಾಹನ ಚಾಲಕರ ತರಬೇತಿ ಕಾರ್ಯಾಗಾರ

ಸಾರಿಗೆ ನಿಯಮಗಳು ಇರುವುದು ನಮ್ಮ ಸುರಕ್ಷತೆಗಾಗಿ – ಪ್ರಸನ್ನ ಎನ್ ಭಟ್ ಪುತ್ತೂರು: ಪ್ರಶಿಕ್ಷಣ ಘಟಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಆಶ್ರಯದಲ್ಲಿ ವಾಹನ ಚಾಲಕರ ತರಬೇತಿ ಕಾರ್ಯಾಗಾರ ವಿವೇಕಾನಂದ ಪಾಲಿಟೆಕ್ನಿಕ್ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಭಟ್ ಮಾತನಾಡಿ ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ ಸಹಕರಿಸಿದ ಶ್ರೀಕೃಷ್ಣನಂತೆ ಈ ಸಂಸ್ಥೆಯ ಸಾರಥಿಗಳು ನಮ್ಮೆಲ್ಲ ಚಾಲಕರು. ಚಾಲಕರ ಕೆಲಸ ತುಂಬಾ ಜವಾಬ್ದಾರಿಯುತವಾದದ್ದು. ಸಾರಿಗೆ

Read More

ಗ್ರಾಮ ವಿಕಾಸ ಯೋಜನೆಯಡಿ ಸಾಕು ನಾಯಿಗಳಿಗೆ ಹುಚ್ಚು ನಿರೋಧಕ ಲಸಿಕಾ ಕಾರ್ಯಕ್ರಮ

ಪುತ್ತೂರು: ಗ್ರಾಮ ವಿಕಾಸ ಯೋಜನೆ, ಇದರ ಆಶ್ರಯದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ಸಹಯೋಗದೊಂದಿಗೆ ಸಾಕು ನಾಯಿಗಳಿಗೆ ಹುಚ್ಚು ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಪಡ್ಡಾಯೂರು ಹಾಗೂ ಪಡ್ನೂರು ಗ್ರಾಮಗಳಲ್ಲಿ ನಡೆಯಿತು. ಪುತ್ತೂರು ವಲಯದ ಪಶುಪಾಲನಾ ವೈದ್ಯಾಧಿಕಾರಿಯಾದ ಧiಪಾಲ ಗೌಡ ಕರಂದ್ಲಾಜೆ ಇವರು ಸಾಕು ನಾಯಿಗಳಿಗೆ ಲಸಿಕೆ ಕೊಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಸಿಕಾ ಕಾರ್ಯಕ್ರಮವು ಅನ್ನಪೂರ್ಣೆಶ್ವರಿ ಭಜನಾಮಂದಿರ ಪಡ್ಡಾಯೂರು, ಪಳ್ಳ ಜಂಕ್ಷನ್ ಹಾಗೂ ಪಡ್ನೂರು ಹಾಲು ಉತ್ಪಾದಕರ ಸಂಘದಲ್ಲಿ

Read More

ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ

ದೇವರ ಮೇಲೆ ನಂಬಿಕೆ ಇಟ್ಟು ವಿಜ್ಞಾನದ ಕಡೆಗೆ ನೆಗೆಯುವ ಪ್ರಯತ್ನ ವಿವೇಕಾನಂದ ಪಾಲಿಟೆಕ್ನಿಕ್ ಮಾಡುತ್ತಿದೆ – ಡಾ. ಪ್ರಭಾಕರ ಭಟ್ ಪುತ್ತೂರು: 33 ವರ್ಷಗಳ ಇತಿಹಾಸವನ್ನು ಹೊಂದಿದ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವು ದಿನಾಂಕ 18-07-2019 ರಂದು ಗಣಪತಿ ಹೋಮ ಹಾಗೂ ಸರಸ್ವತಿ ಪೂಜಾನ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು. ಪೂಜಾ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.

Read More

ವಾರ್ಷಿಕ ಕ್ರೀಡಾಕೂಟ – 2015

ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್‌ ಆರ್. ವೇದವ್ಯಾಸ ಇವರು ಉದ್ಘಾಟಿಸಿದರು. ಹನುಮಂತನ ಶಕ್ತಿ ತಿಳಿಯಲು ಆತ ಸಮುದ್ರಲಂಘನ ಮಾಡಬೇಕಾಯಿತು. ಅದೇ ರೀತಿ ವಿದ್ಯಾರ್ಥಿಗಳ ಶಕ್ತಿ ಕ್ರೀಡಾಕೂಟಗಳ ಮೂಲಕ ತಿಳಿಯುತ್ತದೆ ಎಂದು ನುಡಿದರು. ಪಾಲಿಟೆಕ್ನಿಕ್‌ನ ಬಹುತೇಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀ ಬಿ. ಹರೇಕೃಷ್ಣ, ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಕ್ರೀಡಾಕಾರ್ಯದರ್ಶಿ ರೋಶನ್ ಯಂ.ಎಲ್. ಕ್ರೀಡಾಜ್ಯೋತಿ ಬೆಳಗಿದರು. ವಿದ್ಯಾರ್ಥಿ ನಾಯಕ ಸಬಿತ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದ್ದು, ವಿದ್ಯಾರ್ಥಿನಿ ಪ್ರತಿನಿಧಿ

Read More

ಆಯುಧ ಪೂಜೆ ಆಚರಣೆ

ಆಯುಧ ಪೂಜೆಯನ್ನು 1-10-2014 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಲಯದ ವಿವಿಧ ಪ್ರಯೋಗಾಲಯಗಳನ್ನು ಆಲಂಕರಿಸಲಾಯಿತು. ವೇದಮೂರ್ತಿ ಶ್ರೀ ಮಿತ್ತೂರು ರಾಮಕೃಷ್ಣ ಭಟ್ ಇವರ ನೇತೃತ್ವದಲ್ಲಿ ಪ್ರಯೋಗಾಲಯಗಳಿಗೂ ಹಾಗೂ ವಾಹನಗಳಿಗೂ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಧೀ:ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ದಕ್ಷಯಜ್ಞ ಎಂಬ ತಾಳಮದ್ದಳೆ ನಡೆಯಿತು. ಈ ಸಂದರ್ಭದಲ್ಲಿ ತೃತೀಯ ಮೆಕಾನಿಕಲ್ ವಿದ್ಯಾರ್ಥಿಯಾದ ವಿಘ್ನೇಶ್‌ಗೌಡ ಹಾಗೂ ತಂಡ ನಿರೂಪಿಸಿದ ಕಿರು ಚಲನಚಿತ್ರ A DAY IN THE JUNGLE ನ್ನು ವಿದ್ಯಾಲಯದ ಆಡಳಿತ ಮಂಡಳಿಯ

Read More

ಕ್ಲಬ್, ಪಬ್ ಮತ್ತು ವೆಬ್ ನಿಂದ ದೂರ ನಿಂತು ಸ್ವಸ್ಥಸಮಾಜ ನಿರ್ಮಿಸಿ ವಿದ್ಯಾರ್ಥಿಗಳಿಗೆ ಆದರ್ಶ ಗೋಖಲೆ ಕರೆ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ 2014-15 ರ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು 18-09-2014 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕರಾದ ಶ್ರೀ ಆದರ್ಶಗೋಖಲೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಮೌಲ್ಯ ಹಾಗೂ ಆದರ್ಶಗಳುಳ್ಳ ಇಂದಿನ ಭಾರತದ ಯುವ ಶಕ್ತಿಯು ಜಗತ್ತಿನ ಗಮನ ಸೆಳೆಯುತ್ತಿದೆ. ಇದರ ಸದುಪಯೋಗ ನಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಪಬ್, ಕ್ಲಬ್ ಹಾಗೂ ವೆಬ್ ನಿಂದ

Read More

ಇಂಜಿನಿಯರ್ಸ್ ಡೇ ಆಚರಣೆ

ಇಂಜಿನಿಯರ್ಸ್ ಡೇಯನ್ನು 15-09-2014 ರಂದು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕ್ನೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಹಾಗೂ ಪುತ್ತೂರಿನ ಯುವ ಉದ್ಯಮಿ ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್‌ನ ಅಧ್ಯಕ್ಷ ಶ್ರೀ ರವೀಂದ್ರರೈಯವರು ಈ ಸಂದರ್ಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿಗಳ ಜೀವನವನ್ನು ಅಧ್ಯಯನ ಮಾಡಿ ಅವರ ಒಳ್ಳೆಯ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಹಾಗೂ ವಿಶ್ವೇಶ್ವರಯ್ಯರವರು ವಿಭಿನ್ನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದ

Read More

Highslide for Wordpress Plugin